Friday, August 26, 2011

ಲೈಫು ಲೈಟಾಗಿ

Stage 1
ಸೋಮುವಾರ ಪ್ರಿನ್ಸಿ  ಕ್ಲಾಸು
ತುಂಬಾನೆ ಬೇಜಾರು,
ಅದ್ರೂ ಇವರು ಹಾಜರು
ಮೊದಲ ಬೆಂಚಿನ ಹುಡುಗರು.

Stage 2
ತಿರುಗಿತು ಟೈಮರ್ರು
ಕ್ಲಾಸಿಗೆ ಇವನು ಟಾಪರ್ರು,
ಇಂಟರ್ವ್ಯೊಲೋ ಸುಪರ್ರು
ಅದ  ಇಂಜಿನಿಯರ್ರ್. 

Stage 3
ಶನಿವಾರ ಅದರೇನು
ಭಾನುವಾರ ಬಂದರೆನು,
ಆಫೀಸಿನಲ್ಲೆ ಕೊತಿರು
ದುಡಿಮೇನೆ  ದೇವರು!!!

Stage 4
ಲೈಫಿನಲ್ಲಿ ವೈಫು ಎಂಟರ್ರು
ಬುದ್ದಿಕಲಿತ ಸಾಹೇಬ್ರು.
ಕಾಲಿ ಇರುವ neighborru 
ಸಿಕ್ಕಾಪಟ್ಟೆ ಡೆಂಜರ್ರು!!!.

Stage 5
ಲೋನು ಕೊಡುವ ಭ್ಯಾಂಕರು
ಸೈಟು ಮನೆ ಟಾರ್ಚರ್ರು,
ಹುಡಗ ಪಾಪ ಪಾಪರ್ರು
ಕಸ್ತೊರಿ ನಿವಾಸದ್ ಅಣ್ಣವ್ರು.

Sunday, June 26, 2011

Coldplay & The Scientist

These days am listening to coldplay a lot..
Scientist song of theirs has become my favourite.
After listening to Scientist for an entire day (literally ).. thought of scribbling something and the result is the below one.

Its no way intended to match their Original song or the String within it.
just thought will be fun sharing whatever i could do.

In grief and Pain
when you have lost again
standing out from the main
thinking once again..


No matter how slow
cant escape the flow
you end up hating the clock
no being able to turn it back..




Let there be rain
washing all ur pain
hope you would see the cloud
and sight the silver line

--X!!! may

Friday, January 21, 2011

ಇಬ್ಬರು ಮೂಕರು

ಆ ಕೋಣೆಲಿ ಅವರಿಬ್ಬರೇ ಇದ್ದರು . ರಾಮು ಅಲ್ಲಿಗೆ ಮೊದಲು ಬಂದವ.ಅವನಿಗೆ ತಾನು  ಯಾಕೆ,ಹೇಗೆ ಬಂದೆ ಅನ್ನೋ ಬಗ್ಗೆ ಒಂದು ನಯಾ ಪೈಸೆ ಅಷ್ಟು ನೆನಪಿಲ್ಲ . ರಾಮ  ಬಂದ ದಿನವೇ ಮಧ್ಯಾನ್ಹ ೨ ಘಂಟೆ ಸುಮಾರಿಗೆ ಭೀಮನ ಆಗಮನ ಆಯಿತು.  ಅಂದು ಅವರಿಬ್ಬರದು ಒಂದೇ ಪ್ರಶ್ನೆ , ನಾವು ಯಾಕಿಲ್ಲಿದಿವಿ,ಮತ್ತೆ ಮುಂದೇನಾಗುತ್ತೆ ?  ಆದರೆ ಅಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡೋ ಧ್ವನಿಗಳಯಾವುವೋ ಇರಲಿಲ್ಲ.

 ಪರಸ್ಪರ ಒಬ್ಬರನ್  ಒಬ್ಬರು ನೋಡಿದ ಅವರಿಗೆ ತಾವಿಬ್ಬರು ಮೂಕರು ಅನ್ನೋ ಅಂಶ ತಿಳಿಯಲು ಹೆಚ್ಚಿನ ಸಮಯವೇನು ಹಿಡಿಯಲಿಲ್ಲ.
  ಒಬ್ಬರಿಗೋಬ್ಬರು ಕಣ್ಣಲ್ಲೇ ಮಾತಾಡೋ  ಪ್ರಯತ್ ಮಾಡಿದ್ರು ಏನೋ ಪ್ರಯೋಜನ ಆಗ್ಲಿಲ್ಲ.
ರಾಮು ಕೆಲವೇ ಘಂಟೆಗಳ ಹಿಂದೆ ತನಗಾದ ಶಾಕ್ ನಿಂದ ಹೊರಬಂದಿದ್ದ.ಭೀಮನ ಇರುವಿಕೆ ಅವನಲ್ಲಿ ಕೊಂಚ ಧೈರ್ಯ ತಂದಿತ್ತು .

ದಿನದ ಬದಲಾವಣೆಗಳು ಭೀಮುವನ್ನುಆಶ್ಚರ್ಯಗೊಳಿಸಿದ್ವು,ಎಂದಿನಂತೆ ಹುಲ್ಲುಗಾವಲಲ್ಲಿ ತನ್ನ ಪಾಡಿಗೆ ಅಲೆಯುತಿದ್ದ ಅತನನ್ನ ದಡೂತಿ ದೇಹದ ಇಬ್ಬರು ಅನಾಮತ್ತಾಗಿ ಹಿಡಿದೆಳೆದಿದ್ದರು. ಕಾಲುಗಳನ್ನ ಸರಪಳಿಂದ ಬಿಗಿದು ಲಾರಿಯೊಳಗೆ ಹಾಕಿದ್ದೊಂದೇ  ಅವನಿಗಿರುವ ನೆನಪು .
ಭೀಮು ಜೋರಾಗಿ ಕೂಗಿದ,.ಬಿಡಿಸಿಕೊಳ್ಳಲು ಕೊಸರಡಿದ,  ಕೊನೆಗೆ ಅವನೆಲ್ಲ ಪ್ರತಿಭಟನೆಗಳು ಮುಗಿದಾಗ  ಸುಸ್ತಾಗಿ ನಿದ್ದೆ ಹೋದ. 
Its Not what you SAW ! !


ಬಹುಷಃ ರಾಮೂವಿಗೂ ಹೀಗೆ ಆಗಿರಬಹುದು ಎಂದೆನಿಸಿ ಕೋಣೆಯ ಬಾಗಿಲಿನತ್ತ ನೋಡುತಿರಲು,ದಡರ್ ಎಂದು ತೆಗೆದ ಬಾಗಿಲಿಗೆ  ಅರೆ ಕ್ಷಣ ಆತ  ನಡುಗಿ ಹೋದ .
ಬಾಗಿಲಿನಿಂದ ಇಬ್ಬರು ಧಡೂತಿ ದೇಹಿಗಳು ಒಳಬಂದರು . ಅವರ ಕೈಯಲಿದ್ದ ಮಚ್ಚನ್ನ ನೋಡಿ ರಾಮು ಮತ್ತೆ  ಮೂರ್ಚೆ ಹೋದ.ಭೀಮ ಅವರಿಬ್ಬರೇ ತನ್ನನ್  ಇಲ್ಲಿಗೆ ಎಳೆದು ತಂದಿದ್ದು ಎಂದು ಗುರುತಿಸಿದ . ಆ ದಡೂತಿಗಳೋ  ಭೀಮವಿಗೆ ಅರ್ಥವಾಗದ ಭಾಷೇಲಿ  ಮಾತ ನಾಡುತಿದ್ರು. ಭೀಮು ಅರ್ಥವಗಾದಿದ್ರು ಕeಳುತಹೋದ .

"ಲೇ ಇ ಸಲ ಹಬ್ಬದೂಟ ಬಹಳ ಮಜವಾಗಿ ಇರ್ಥತಿ , ಅವ್ನವನ್ನ  ೧೦೦ ರೊಪಾಯಿ ಹೆಚ್ಗಿ ಕೊಟ್ಟರು ಒಳ್ಳೆ  ಕುರಿಗಳನ ತಂದವಿ.
 ಅದ್ರಾಗೂ ನಮ್ಮ ಅವ್ವ ಮಟನ್ ಸಾರ್  ಮಸ್ತಾಗಿ ಮಾಡ್ಥಳ "  ಒಬ್ಬ ಇನ್ನೊಬ್ಬ ದಡೂತಿಗೆ ಹೇಳಿದ .
 ಇಬ್ಬರು  ಒಂದೊಂದು ಕುರಿಗಳನ್ನ  ಹೆಗಲ ಮೇಲೆ ಹೊತ್ತ್ಕೊಂಡು ಊರ ಹೊರಗಿನ ಕೆರೆಯ ಕಡೆ ಹೆಜ್ಜೆ
ಹಾಕಿದ್ರು .

ರಾತ್ರಿ ಎಂಟರ ಸುಮಾರಿಗೆ ರಾಮು ಭೀಮು ಇಬ್ಬರು ಹಬ್ಬದ ಊಟದ  ಮಟನ್ ಪೀಸಾಗಿದ್ರು..

Tuesday, January 18, 2011

ಅವಳಿಗೆಲ್ಲ ಹೇಳೋ ಮುನ್ನ

ಸಾಲು ಮರದ ನೆರಳಿನೊಳಗೆ
ನಗುತ ನಿಂತ ಅವಳ ಜೊತೆಗೆ
ಮನದ ಮಾತ ಹೇಳೋ ಘಳಿಗೆ                        
Happily Inspired
ಮಾತಿಗಿಂತ ಮೊದಲೇ ಅವಳ ಸೇರಿದೆ  
ಮರದ ಹೂವು ಜೋರು ಗಾಳಿಗೆ ..               

ದಡದಿ ಅವಳ ನಡುಗೆಗೆ
ಮೂಡೋ ಬಿಂಬ ನೀರಿಗೆ
ಮೆಲ್ಲ ಮುಟ್ಟಹೋದ ನನಗೆ
ನುಚ್ಚು ನೂರು ಕನಸು
ಯಾರೋ ಎಸೆದ ಕಲ್ಲಿಗೆ ...

ಮೂಡದ ಹಿಂದೆ ಅವಿತು ಕುಳಿತು
ಚಳಿಯಲಿ ನನ್ನೊಳಗೆ ಸಣ್ಣಗೆ ಬೆವೆತು
ಅವಳಿಗೆಲ್ಲ ಹೇಳೋ ಕ್ಷಣಕೆ
ಅವಿತ ಮೋಡ ಮಳೆಯಾಗಿ  ಕರಗಿದೆ
ಎಲ್ಲಿಂದಲೋ ಎದ್ದ ಸೂರ್ಯನ ಬಿಸಿಲಿಗೆ



 

Saturday, January 15, 2011

Go Green

                           Go Green

 Down the Mountain
Striving to sustain
Drying river cried
One last time Go Green.


Running for Cover
from the Raging Fire
Orphan deer with heart full of Fear
Cried one last time Go Green.

Flying Low with the Broken Wing
Butterfly caught in the Tornado swing
hoping for the change we bring
Cried one last time Go Green.


Deep in the Wood
Trapped in the Mud
Comes out the  mother earth
Says one last time Go Green...



Tuesday, January 4, 2011

ಹಂಚಿಕೊಂಡ ಕನಸು

ಕನಸನ್ನ ಬೇರೆಯವರಿಗೆ ಹೇಳೋದು , ಅಥವಾ ಬೇರೆಯವರಿಗೆ ಬಿದ್ದ ಕನಸಿನ ಬಗ್ಗೆ ಕೇಳೋದು ಅಂದ್ರೆ ಯಾರಿಗೆ ತಾನೆ ಇಷ್ಟ  ಇಲ್ಲ ?

ನೀವು ಮಲಗಿದ್ದಾಗ ಕನಸು,ನಿಮ್ಮಲ್ಲಿರೋ ಕಥೆಗಾರನನ್ನ ಜಾಡಿಸಿ ಒದ್ದು ಎಬ್ಬಿಸಿ ಕೂರಿಸುತ್ತೆ . ಆ ಕಥೆಗಾರನೋ ತುಂಬಾ ಮೂಡಿ . ಕೆಲುವು ಸಲ ಹಿಂದೆ ಎಂದೋ ನಡೆದ  ಘಟನೆ  ನೆನ್ಸ್ಕೊಂಡ್ರೆ ,ಇನ್ ಕೆಲುವು ಸಲ ನೀವು ಕೇಳರಿಯದ  ಜಾಗಗಳಿಗೆ ಕರ್ಕೊಂಡ್ ಹೋಗಿ  ನೀವು       ನೋಡಿರದ ವ್ಯಕ್ತ್ಹಿಗಳನೆಲ್ಲ ಮೀಟ್ ಮಾಡಿಸತಾನೆ .

ಕನಸುಗಳು  ಮನಸಿನ  ಕನ್ನಡಿ ಅಂತ ಕೆಲುವು ಸಲ ಅನಿಸಿದರೆ ಇನ್ನು ಕೆಲವು ಸಲ ಕನಸುಗಳೇ ಮನಸಿನ ಲಹರಿಗಳಿಗೆ ಮುನ್ನುಡಿ ಹಾಡ್ತವೆ ಅನ್ಸುತ್ತೆ.ರಾತ್ರಿ ಬಿದ್ದ ಕೆಟ್ಟ ಕನಸೊಂದು  ದಿನ ಪೂರ್ತಿಯನ್ನ  ದುಗುಡದಲ್ಲೇ ಕಳೆಯುವಂತೆ ಮಾಡಿದರೆ, ಯಾವ್ದೋ ದಿನ ನಡೆದ ಪ್ರಸಂಗ ಗಳು  ಕನಸಿನ ಲೋಕದಲ್ಲಿ ಮತ್ತೆ ಬಂದು ಕಾಡೋದು ಇದೆ.



 ಕನಸಲ್ಲಿ ಇರೋ ಇನ್ನೊದು ಮಜಾ ಏನಪ್ಪಾ ಅಂದ್ರೆ . ನಮ್ಮ  ಕನಸಲ್ಲಿ ಹೆಚ್ಚಿನ ಸಲ ನಾವೇ hero ಆಗಿರ್ಥಿವಿ ..  Example ಗೆ ಅಂದ್ರೆ ,

 ರಜನಿಕಾಂತ್ ತರ ಸುತ್ತ ನಿಂತರೋ ರೌಡಿಗಳನ್ನೆಲ್ಲ ಚಚ್ಚಿ  ಆಕಾಶಕ್ಕೆ ಎಸದು,ಪಕ್ಕ ನಿಂತಿರೋ ಹುಡುಗಿ ಕಡೆ ಸ್ಲೋ ಆಗಿ ತಿರ್ಗೋದು,
 Friends ಎಲ್ಲ ಟ್ರಿಪ್ ಹೋದಾಗ ಯಾರೋ ಕಾಲ್ಜಾರಿ ನೀರೊಳಗೆ ಬಿದ್ದರೆ ,ನಾವು ಹಾರಿ,ಈಜಿ ಕಾಪಾಡೋದು ( ನಿಜವಾಗ್ಲೂ ಈಜು ಬರಲ್ಲ ಅಂತ ನೆನಪಾಗೋದು ಬೆಳಗ್ಗೆ  ಎದ್ದಾಗಲೇ ).
ಬಾರಪ್ಪ ಪುಟ್ಟ ಅಂತ ಅಜ್ಜಿ ಇಷ್ಟ ಅಗೋ ತಿಂಡಿ ಮಾಡಿ ಕೊಡೋದು.
ಕಾಲೇಜ್ ನಲ್ಲಿ  ಪ್ರಿನ್ಸಿಪಾಲ್ ಕರೆದು ನೀನೆ ಕ್ರಿಕೆಟ್ captain  ಅಗ್ಬೇಕಪ್ಪ ಅನ್ನೋದು ( ನಿಮ್ಮನ್ನ ಕಾಲೇಜ್ ಕ್ರಿಕೆಟ್ ಟೀಂ ನಿಂದ ಬಿಟ್ಟಾಗ ಇ ತರ ಕನಸುಗಳು ಹೆಚ್ಚು).
ನಾರಾಯಣ್ ಮೂರ್ತಿ  ಬೆನ್ನಹಿಂದೆ ಬಂದು ಏನಪ್ಪಾ ಇಷ್ಟೊಂದು ಕಷ್ಟ ಪಟ್ಟು ಕೆಲಸ ಮಾಡ್ತೀಯ ಬೇಶ್ ಅನ್ನೋದು ..
ಒಟ್ನಲ್ಲಿ ಕನಸುಗಳ ಪ್ರಪಂಚ ಅದ್ಬುತ ...ನಿಮ್ಮ ಕನಸುಗಳ ಅನುಭವನ ಬೇರೆಯವರೊಂದಿಗೆ  ಹಂಚ್ಕೊಳ್ಳಿ ..

Whats your   Dream ?
PS : ಮೇಲೆ ಹೇಳಿದ ಯಾವದೇ ಕನಸುಗಳು ನನ್ನವಲ್ಲ...

Tuesday, October 12, 2010

Life ಇಷ್ಟೇನೆ

ನಿಜ ಹೇಳಬೇಕು  ಅಂದ್ರೆ ರಾಜಕೀಯದ ಬಗ್ಗೆ ಹೆಚ್ಹೇನು ಗೊತ್ತಿಲ್ಲದ ಜನ ಕೊಡ ಇಂದು ವಿಧಾನ ಸೌಧದದ ಕಡೆ ಮುಖ ಮಾಡಿ ಉಗೀತಾ ಇದಾರೆ. ಇವರೆಲ್ಲ ಎಲೆ ಅಡಿಕೆ ಹಾಕೋವ್ರಾಗಿದ್ರೆ ವಿಧಾನ ಸೌಧದ ಕಲರ್ರು ಕೆಂಪಗಾಗಿ ಬಿಡ್ತಿತಿತ್ಹೆನೋ..  ನಾಯಕನಾದವನು ಸರಿ ಇದ್ರಲ್ವೆ ತನ್ನ ಕೆಳ್ಗಿರೋವ್ರುಗೆ ಹೇಳೋಕೆ ಆಗೋದು  ..  ಹೇಳಬೇಕಾದವನೇ  ಹಣ ಮಾಡೋಕೆ  ಪಂಚೆ ಕಟ್ಟಿ ನಿಂತರೆ  ಯಾರೇನ್ ಮಾಡಕ್ಕೆ  ಆಗುತ್ತೆ
ಅಲ್ಲ ನಮ್ಮ ಮಂತ್ರಿಗಳಿಗೆ ಏನಾಗಿದೆ .. ಒಬ್ಬನಾದ್ರು ಜನರ ಸ್ನೇಹ ಮಾಡಬೇಕು, ನಾಡಿಗೆ ಒಳ್ಳೆ ಹೆಸರ್ ತರಬೇಕು ಅನ್ನೋ ಮನಸಿಂದ ರಾಜಕೀಯಕ್ಕೆ ಇಳಿದಿಧಾನ .. ಕೆಲವ್ರು  ನಮ್ ಅಪ್ಪ ಅವ್ನೆ ಅಂತ ರಾಜಕೀಯಕ್ಕೆ ದುಮುಕಿದರೆ ಇನ್ ಕೆಲವರು ಮಾಡಕ್ಕೆ ಏನು ಕ್ಯಾಮೆ ಇಲ್ಲ ಅಂತ  ಚಡ್ಡಿ ಬಿಗಿದವರು .
 T .V ಇಂಟರ್ವ್ಯೂ ಗಳಲ್ಲಿ  ತಿಕಲು ಮುಂಡೆವು ತರ ಕಿತ್ತಡ್ಕೊಂಡು ನೋಡೋ ಪ್ರಜೆಗಳಿಗೆ ಬಿಟ್ಟಿ ಮಜಾ ಕೊಡೊ ಇವರಿಗೆ ಎಸ್ಟ್ ಉಗುದ್ರು ಒರಸಿಕೊಂಡು ಹೋಗ್ತರೆ  ..

ಇನ್ನು ನಮ್ ರಾಜ್ಯದ ಜನ ಏನು ಬಹಳ ಸಾಚ ಅಲ್ಲ .. ಎಲೆಕ್ಷನ್ ಟೈಮ್ ಅಲ್ಲಿ correct ಆಗಿ ವೋಟು  ಹಾಕ್ರೋ ಅಂದ್ರೆ ಮನೇಲಿ ಆರಾಮಾಗಿ ಮಲ್ಕೊತಾರೆ .. ಇಲ್ಲ ಅಂದ್ರೆ  "ಹೊದ್ಸಲ ನಿಮ್ಮ ಅಪ್ಪ ಚೆನ್ನಾಗಿ ಕಾಸ್ ಮಾಡವ್ನೆ ನಮ್ಗೆ ಒಂದ್ ವೋಟಿಗೆ ೫೦೦ ಕೊಡು" ಅಂತ ಹೇಳಿ  ನಾಮ ಎಳ್ಕೊತಾರೆ.

ಇನ್ನಾದ್ರು   ಜಾತಿ - ದುಡ್ಡು -ಗುಂಡು ಇವುಗಳಿಗೆ  ವೋಟು ಹಾಕೋದ್ ಬಿಡ್ರೋ ... ಇಲ್ಲ ಅಂದ್ರೆ ನಿಮ್ ಲೈಫ್  ಇಷ್ಟೇನೆ ...