Thursday, October 7, 2010

ಕಳವಳದ ಕವಿತೆ

  ಕಾಯ್ಕಿಣಿ ಅವರ ಸಾಹಿತ್ಯವೇ ಅಂತಹುದು . . ಸುಮ್ಮನೆ ಒರಗಿ ಕುಳಿತವನನ್ನು ತನ್ನೊಳಗೆ ಗುನುಗುವಂತೆ  ಮಾಡುವ ಅವರ ಕ್ರಿಯಾಶೀಲತೆ , ಪದಗಳ ಸರಳ ಜೋಡಣೆ ನನ್ನ ಸೆಳೆಯುವವು . ನಾ ತುಂಬಾ ಇಷ್ಟ ಪಡುವ ಸಾಹಿತಿ ಅವರು.
 ಆ ದಿನ ಬಸ್ನಲ್ಲಿ  ಕಿಟಕಿಯ ಕಡೆ ಏನೋ ನೋಡುತ  ನನ್ನನೆ ಮರೆತಾಗ , ಕಾಯ್ಕಿಣಿಯವರ  'ಅನಿಸುತಿದೆ ' ಹಾಡು  ಸನಿಹದ speaker  ನಿಂದ ಹೊರಬಂದು ನನ್ನನು ವಾಸ್ಥವಕೆ ಎಳೆ ತಂದಿತು .  ನಾನೂ ಏನಾದರೊಂದು ಗೀಚಲೇ  ಎಂದೆನಿಸಿ ಬರೆದಾಗ ಮೂಡಿದ  ಸಾಲುಗಳಿವು.


         ನಿನ್ನ ಕಹಿಗಳು ನನ್ನ ಕೂಡಲಿ
         ನನ್ನ ಸಿಹಿಗಳು ನಿನ್ನ ಸೇರಲಿ.
         ನಿನ್ನ  ಮೌನ ನನಗೆ ಕೇಳಲಿ
         ನನ್ನ ಸಂತಸ ನಿನ್ನದಾಗಲಿ .

         ನೀ ನಿಂತ  ಮಳೆಯಲಿ    
         ನಾ ನೆನೆಯಲಿ,
         ನನಗಿರುವ  ತಂಗಾಳಿ
         ನಿನಗೆಂದೇ  ಬೀಸಲಿ.
                   
Ps : ನಿಮಗೆ silly ಎನಿಸಲು ಉಗಿದು ಕಾಮೆಂಟ್ ಹಾಕಿ ...  
                     

No comments:

Post a Comment